Skip to content
Monday, 10 August 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಕೋಗಿಲು ಗ್ರಾಮದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

Share

ಯಲಹಂಕ :  ದಿನಾಂಕ 07.08.2026 ರಂದು ಕೃಷ್ಣ ಬೈರೇಗೌಡ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಅಧ್ಯಕ್ಷತೆಯ ಮೇರೆಗೆ ಸಂಜೆ​ 5 ಗಂಟೆಯಿಂದ  ಕೋಗಿಲು ಗ್ರಾಮದಲ್ಲಿ  ಪೂಜಮ್ಮ ದೇವಿ ಮತ್ತು ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಸಂಕಲ್ಪ ಸೇವೆ, ಮತ್ತು ಭಕ್ತಾದಿಗಳಿಂದ ವಿಶೇಷ ಪೂಜೆ ಕುಂಕುಮಾರ್ಚನೆ ನೆರವೇರಿತು. ಈ ಕಾರ್ಯಕ್ರಮವನ್ನು ಕೋಗಿಲು ಗ್ರಾಮದ ಪೂಜಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಕೋಗಿಲು ಗ್ರಾಮ ಹಾಗೂ ಅಗ್ರಹಾರ ಕಟ್ಟಿಗೆನಹಳ್ಳಿ ಹಾಗೂ ಸುತ್ತು ಮುತ್ತಲಿನ ಭಕ್ತಾದಿಗಳು ಪೂಜಮ್ಮ ದೇವಿ ಮತ್ತು ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಲು, ಸುಮಂಗಲಿಯರು ಮತ್ತು ಭಕ್ತಾದಿಗಳು ಸೇರಿ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಕುಂಕುಮಾರ್ಚನೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.


​ಮಳೆಯ ಅನುಗ್ರಹ: ಕಳೆದೆರಡು ದಿನಗಳಿಂದ ಮಳೆ ಇಲ್ಲದೆ ಇದ್ದರೂ, ಪೂಜೆಯ ಶುಭ ಸಂದರ್ಭದಲ್ಲಿ ಮಳೆಯಾಗಿ ಗ್ರಾಮ ಹಾಗೂ ಸ್ಥಳ ಶುದ್ಧಿಯಾಯಿತು ಎಂದು ಪೂಜಾರಿ ವಿಜಯ್ ಕುಮಾರ್ ಅವರು ಸಂಸಂತೋಷ ವ್ಯಕ್ತಪಡಿಸಿದರು.
​ಊರಿನ ಪ್ರತಿಯೊಬ್ಬರಿಗೂ ಹಾಗೂ ಅವರ ಕುಟುಂಬಕ್ಕೆ ದೀರ್ಘ ಸುಮಂಗಲಿಯರ ಶ್ರೇಯಸ್ಸು ಮತ್ತು ಶುಭ ಉಂಟಾಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.ತದನಂತರ ಮಹಾಮಂಗಳಾರತಿ ನಡೆಯಿತು ಈ ಕಾರ್ಯಕ್ರಮಕ್ಕೆ. ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.


​ಈ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತಾದಿಗಳು ಹಾಗೂ ಸುಮಂಗಲಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.ಅಪಾರ ಸಂಖ್ಯೆಯ ಭಕ್ತಾದಿಗಳು ಮತ್ತು ಮಹಿಳೆಯರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಈ ಕಾರ್ಯಕ್ರಮದಲ್ಲಿ . ಎಚ್ಎ ಶಿವಕುಮಾರ ಸಂಪಿಗೆಹಳ್ಳಿ .ಕೆ ಎನ್ ನಾಗೇಂದ್ರ ಕುಮಾರ್ ಮತ್ತು.ಗೋವಿ ರವರು ಕಾಂಗ್ರೆಸ್ ಮುಖಂಡರು ಕೋಗಿಲು ಹಾಗೂ . ಕೋಗಿಲು ಗ್ರಾಮದ ಸಮಸ್ತ ನಾಗರಿಕರು ಮತ್ತು ಅಗ್ರಹಾರ. ಅಗ್ರಹಾರ ಬಡಾವಣೆ ಚಾಮುಂಡಿ ಲೇಔಟ್ ಕಟ್ಟಿಗೆನಹಳ್ಳಿ ಪಾಲನಹಳ್ಳಿ ವಿನಯನಗರ ದ್ವಾರಕಾ ನಗರ ಇನ್ನು ಅನೇಕ ಸುತ್ತಮುತ್ತಲಿನ ಗ್ರಾಮದ ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು

Written by

Editor Desk - Bayalu Simha News

Leave a Reply

Your email address will not be published. Required fields are marked *